ಸುಖಧರೆ ಪಿಕ್ಚರ್ಸ್ ಲಾಂಛನದಡಿಯಲ್ಲಿಕೆ.ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ ಈ ವರ್ಷದ ಅದ್ದೂರಿ ಚಿತ್ರವೆಂದೇ ಬಿಂಬಿತವಾಗಿರುವ ಅಂಬರೀಶ ಈ ವಾರ ೨೦ರ ಗುರುವಾರದಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಚಿತ್ರದಲ್ಲಿ ಡಾ. ಅಂಬರೀಷ್ ಕೆಂಪೇಗೌಡರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿರುವ ನಿರ್ಮಾಪಕ ಮಹೇಶ್ ಸುಖಧರೆ ಚಿತ್ರವು ಎಲ್ಲಾ ವರ್ಗದ ಜನರನ್ನು ರಂಚಿಸಲಿದೆ ಎಂದು ತಿಳಿಸಿದ್ದಾರೆ.
ಚಿತ್ರಕ್ಕೆಕಥೆ, ಸಂಭಾಷಣೆ ಚಿಂತನ್, ಛಾಯಾಗ್ರಹಣ ಸತ್ಯ, ಸಾಹಿತ್ಯ ನಾಗೇಂದ್ರ ಪ್ರಸಾದ್, ಸಂಗೀತ ಹರಿಕೃಷ್ಣ, ಕಲೆ ಈಶ್ವರಿಕುಮಾರ್, ಸಾಹಸ ರವಿವರ್ಮ, ನೃತ್ಯ ಮುರುಳಿ ಗಣೇಶ್, ಕಲೈ, ಸಂಕಲನ ಪ್ರಕಾಶ್, ನಿರ್ಮಾಣ ಮೇಲ್ವಿಚಾರಣೆ ಮೋಹನ್, ನಿರ್ಮಾಣ ನಿರ್ವಹಣೆ ಅನಿಲ್ಕುಮಾರ್, ಚಿತ್ರದ ಸಹ ನಿರ್ಮಾಪಕರು ಮಹೇಶ್ ನಂಜಯ್ಯ, ಎಂ.ಸುರೇಶ್.
ಡಾ|| ಅಂಬರೀಶ್, ದರ್ಶನಜೊತೆಗೆ ಬಹುಭಾಷಾತಾರೆ ಪ್ರಿಯಾಮಣಿ, ಬುಲ್ ಬುಲ್ ಖ್ಯಾತಿಯ ರಚಿತಾರಾಮ್, ರೇಖಾ, ಬಾಲಿವುಡ್ನ ಖ್ಯಾತ ಖಳ ನಾಯಕಕಲ್ಲಿದೋಜಿಣ, ತುಳಸಿ, ಶರತ್ ಲೋಹಿತಾಶ್ವ, ರವಿಕಾಳೆ, ಬುಲೆಟ್ ಪ್ರಕಾಶ್, ಸಾಧುಕೋಕಿಲ, ತಿಮ್ಮೇಗೌಡ, ನೆ.ಲ. ನೆರೇಂದ್ರಬಾಬು, ಮೊದಲಾದ ಭರ್ಜರಿ ತಾರಾಗಣ ಚಿತ್ರದಲ್ಲಿದೆ.